top of page

Of the 11 playwrights who attended the residencies in September and December,
9 of them submitted drafts of their full length plays in Kannada.

Of those nine, five have been selected by an anonymous jury to be produced at the
Kusumaale Festival to be held at PCPA, Bengaluru in June 2026. 

Read on to find out more.
Bhimanna_edited.jpg

 Playwright: Bhimanna

ನಾನು ಭೀಮಣ್ಣ ಮೂಲತಃ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ಹುಟ್ಟಿ ಬೆಳೆದದ್ದು. ಬದುಕು ಸಂವಾದ ಸಂಸ್ಥೆಯಲ್ಲಿ ಜರ್ನಲಿಜಂ ಕೋರ್ಸ್ ಮುಗಿಸಿ ನ್ಯೂಸ್ ಫಸ್ಟ್ ಕನ್ನಡ ಚಾನೆಲ್ ನಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದೇನೆ. "ಎ ಮಿಡ್ ಸಮ್ಮರ್ ನೈಟ್ ಡ್ರಿಮ್ಸ್,  ದೇವನಾಮ್ ಪ್ರಿಯಾ ಅಶೋಕ, ಒಡಲಾಳ, ಊರು-ಕೇರಿ" ನಾಟಕಗಳಲ್ಲಿ ಅಭಿನಯಿಸಿದ್ದೇನೆ. ರತ್ನಪಕ್ಷಿ, ಬಿಕ್ಷಾಟನೆ, ಮಡಿವಂತರು, ಹಕ್ಕಿ ಹಾಡು, ಬೆಪ್ಪತಕ್ಕಡಿ ಬೋಳೆಶಂಕರ ಹೀಗೆ ಹಲವು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದೇನೆ.  ನಳಂದ ಆರ್ಟ್ಸ್ ಸ್ಟುಡಿಯೋದವರು ನಡೆಸಿದ ನಾಟಕ ರಚನೆ ಶಿಬಿರದಲ್ಲಿ ಪಾಲ್ಗೊಂಡು "ಮುಡ್ದಾರ" ನಾಟಕವನ್ನು ರಚಿಸಿದ್ದೆನೆ. ವಾಟ್ ನೆಕ್ಸ್ಟ್, ಸೂಳೆ ಪಾರ್ವತಿ, ಕುರಿ ಮತ್ತು ನಾನು ಹೀಗೆ ಕಥೆ ಹಾಡುಗಳನ್ನ ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದೇನೆ.

Title: ಬಣ್ಣ

 

"ಬಣ್ಣ" ನಾಟಕವು ಹಳ್ಳಿಯೊಂದರ ಸಾಂಸ್ಕೃತಿಕ ರಾಜಕಾರಣದ ಸಂಕೀರ್ಣತೆಗಳನ್ನು ಅನಾವರಣಗೊಳಿಸುತ್ತದೆ. ಊರಿನ ಏಕೈಕ ಅಕ್ಷರಸ್ಥೆಯಾದ ಮೈತ್ರಾ, ಪರ್ತುಗೌಡನ ಆಜ್ಞೆಯಂತೆ ಮಹಾಭಾರತ ನಾಟಕದ ತಾಲೀಮಿನಲ್ಲಿ ಪಾತ್ರಗಳಿಗೆ ಸಂಭಾಷಣೆ ಕಲಿಸುವ ಮತ್ತು ವಸ್ತ್ರವಿನ್ಯಾಸ ಮಾಡುವ ಜವಾಬ್ದಾರಿ ಹೊತ್ತಿರುತ್ತಾಳೆ. ಆದರೆ, ಅವಳು ತನಗಿರುವ ಕುಂತಿ ಪಾತ್ರದ ಹಂಬಲವನ್ನು ವ್ಯಕ್ತಪಡಿಸಿದಾಗ, "ಕೆಳಜಾತಿಯವರು ಮೇಲ್ಜಾತಿಯವರ ಸರಿಸಮಾನವಾಗಿ ರಂಗದ ಮೇಲೆ ನಿಲ್ಲಲಾಗದು" ಎಂದು ಪರ್ತುಗೌಡ ಅವಳನ್ನು ಅವಮಾನಿಸುತ್ತಾನೆ.

 

 ಈ ನೋವನ್ನು ಬಂಡಾಯವನ್ನಾಗಿ ಬದಲಿಸುವ ಮೈತ್ರಾ, ತನ್ನದೇ ಕೇರಿಯ ಜನರನ್ನು ಸಂಘಟಿಸಿ "ದೇವಿಮಹಾತ್ಮೆ" ನಾಟಕವನ್ನು ಪ್ರದರ್ಶಿಸಲು ಮುಂದಾಗುತ್ತಾಳೆ. ಈ ಕಲಾತ್ಮಕ ಪ್ರತಿರೋಧವನ್ನು ಹತ್ತಿಕ್ಕಲು ಗೌಡ ಅನೇಕ ಅಡೆತಡೆಗಳನ್ನು ಒಡ್ಡುತ್ತಾನೆ. ಪ್ರಸ್ತುತ ಸಮಾಜದ ಕಲಾ ರಾಜಕಾರಣ ಮತ್ತು ಜಾತಿ ಪದ್ಧತಿಯ ಅಸಮಾನತೆಯನ್ನು "ಬಣ್ಣ" ನಾಟಕವು ಚಿತ್ರಿಸುತ್ತದೆ.

 

Title: Banna 

Banna explores the cultural politics of a local town. Maitra, the town's only literate woman, is involved in a local Mahabharata production. She handles the dialogue coaching for the actors and takes on the responsibility of stitching all the costumes for the play.

While watching the rehearsals, Maitra expresses her desire to play the role of Kunti. However, the local leader, Partugowda, insults her, stating that someone from her background cannot stand as an equal to those from the dominant community on stage.

Deeply hurt by this exclusion, Maitra decides to take action. She organizes a team from her own neighborhood to stage a rival production of Devimahathme. Unwilling to accept her creative rebellion, Gowda uses various tactics to try and stop her performance.

The play serves as a reflection of contemporary social and artistic politics, highlighting the inequalities that persist in today's world.

Playwright: Maruthesha Kasapura

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ರಂಗಭೂಮಿ ಆಸಕ್ತಿಯಿಂದ ರಂಗಾಯಣ (ಭಾರತೀಯ ರಂಗ ಶಿಕ್ಷಣ) ಮೈಸೂರು ರಂಗಶಿಕ್ಷಣ ಪಡೆದು ಹಾಗೂ ಜಾನಪದ ಲೋಕ ರಾಮನಗರದಲ್ಲಿ ಜಾನಪದ ಡಿಪ್ಲೊಮಾ ಜಾನಪದ ಶಿಕ್ಷಣ ಪಡೆದು ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ " ಆಧುನಿಕ ಕನ್ನಡ ರಂಗಭೂಮಿ: ಪಠ್ಯ-ಪ್ರಯೋಗಗಳಲ್ಲಿ ಪ್ರತಿಮೆ" ಎಂಬ ವಿಷಯದ ಮೇಲೆ ಸಂಶೋಧನಾ ವಿದ್ಯಾರ್ಥಿ ಆಗಿದ್ದೇನೆ. ಮಾಯಾದ್ವಾರ ( ಮಕ್ಕಳ ನಾಟಕ), ಸ್ವರ್ಶ ಗ್ರಹಣ (ನಾಟಕ), ಮೊಬೈಲ್ ಮಂಡಲದ ಮಧ್ಯೆದೊಳಗೆ (ನಗೆ ನಾಟಕ), ಅಪ್ರಕಟಿತ ಆಗಿದ್ದರೂ ರಂಗ ಪ್ರಯೋಗಗೊಂಡಿವೆ. ಅನೇಕ ಹವ್ಯಾಸಿ ತಂಡಗಳು ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ನಿರ್ದೇಶಕನಾಗಿ, ರಂಗ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವೆ ಹಾಗೂ ನನ್ನ ಅನೇಕ ಕವಿತೆಗಳು ಸಮಾಜಮುಖಿ, ಪ್ರಜಾ ಪ್ರಗತಿ, ತುಮಕೂರು ವಾರ್ತೆ, ನಗೆ ಮುಗುಳು, ಉತ್ಥಾನ, ಇತ್ಯಾದಿ ರಾಜ್ಯ ಪ್ರಾದೇಶಿಕ ಪ್ರತಿಕೆಗಳಲ್ಲಿ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿ, ಕಾಡುವ ಕೀರಂ, ಎಚ್.ಎ.ಎಲ್., ರಾಜ್ಯ ಮಟ್ಟದ ಸಂಸ್ಥೆಗಳು ಆಯೋಜಿಸಿರುವ ಕವಿಗೋಷ್ಠಿ ಕಾವ್ಯ ವಾಚನ ಮಾಡಿದ್ದೇನೆ. ಒಟ್ಟಾರೆ ಸಾಹಿತ್ಯ, ರಂಗಭೂಮಿ, ಜಾನಪದ, ಸಿನಿಮಾ ಕ್ಷೇತ್ರದ ಆಸಕ್ತಿಯ ವಿದ್ಯಾರ್ಥಿ.

Title: ಸರಗು

 

ಶ್ರೀರಾಮಾಪುರ ಎಂಬ ಊರಿನಲ್ಲಿ ಧರ್ಮ ಮತ್ತು ರಾಜಕಾರಣ ಹೇಗೆ ಸಾಮಾನ್ಯ ಜನರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದೇ ಈ ನಾಟಕದ ಕಥಾವಸ್ತು.

ತಲೆಮಾರುಗಳಿಂದ ಮೆಟ್ಟು ಹೊಲಿಯುವ ಕುಲಕಸುಬು ಮಾಡಿಕೊಂಡಿರುವ ಓಬಳಪ್ಪನ ಕುಟುಂಬಕ್ಕೆ, ಅವರ ಮನೆಯ ಮುಂದಿನ ಅರಳಿಮರವೇ ಆಸರೆ. ಆದರೆ, ಒಂದು ಮಳೆಗಾಲದ ರಾತ್ರಿ ಆ ಮರದ ಬುಡದಲ್ಲಿ ಅನಿರೀಕ್ಷಿತವಾಗಿ ಪತ್ತೆಯಾಗುವ ಒಂದು ಕಲ್ಲು ಇಡೀ ಊರಿನ ಚಿತ್ರಣವನ್ನೇ ಬದಲಿಸುತ್ತದೆ. ಊರಿನ ಪೂಜಾರಿ ಮತ್ತು ರಾಜಕೀಯ ನಾಯಕರು ಸೇರಿ ಆ ಕಲ್ಲಿಗೆ ಧಾರ್ಮಿಕ ಬಣ್ಣ ಹಚ್ಚಿ, ಅರಳಿಮರವನ್ನು ಕಡಿದು ಅಲ್ಲಿ ಗುಡಿ ಕಟ್ಟಲು ಸಂಚು ರೂಪಿಸುತ್ತಾರೆ.

ಇವೆಲ್ಲದರ ನಡುವೆ, ಓಬಳಪ್ಪನ ಮಗ ಮಾದ ಊರಿನ ರಾಜಕೀಯ ನಾಯಕರ ಬಲೆಯೊಳಗೆ ಸಿಲುಕಿಕೊಳ್ಳುತ್ತಾನೆ. ಮನೆಯೊಳಗಿನ ಭಿನ್ನಾಭಿಪ್ರಾಯ ಮತ್ತು ಊರಿನ ಉಳ್ಳವರ ಕುತಂತ್ರಗಳ ನಡುವೆ ಓಬಳಪ್ಪ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಮಗ ಮಾದ ತನ್ನ ಅಪ್ಪನ ಹೋರಾಟಕ್ಕೆ ಹೇಗೆ ಸಾಥ್ ನೀಡುತ್ತಾನೆ?

ಅಂಬೇಡ್ಕರ್ ಅವರ ಆಶಯ ಮತ್ತು ಸ್ತ್ರೀ ಸಂವೇದನೆಯನ್ನು ಒಳಗೊಂಡಿರುವ ಈ ನಾಟಕವು, ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯ ತಂತ್ರಗಳು ಮುಗ್ಧ ಮನಸ್ಸುಗಳ ನಡುವೆ ಹೇಗೆ ಕಲಹ ಉಂಟುಮಾಡುತ್ತವೆ ಎಂಬುದನ್ನು ಚಿತ್ರಿಸುತ್ತದೆ.

 

Title: Saragu 

The play Saragu explores how the intersection of religion and politics creates a storm in the lives of ordinary people in a village called Shrirampura.

For generations, Obalappa’s family has sustained itself through their traditional occupation of shoemaking, finding shade and support under the Peepal tree in front of their house. However, a stone unexpectedly discovered at the base of that tree on a rainy night changes the village forever. The local priest and political leaders give the stone a religious color, plotting to cut down the tree to build a temple.

In between all this, Obalappa’s son, Mada, falls into the trap of the village’s political power-players. Amidst internal family conflicts and the conspiracies of the local elite, how will Obalappa save his cultural identity? And how will Mada eventually find his way back to support his father's struggle?

Reflecting Ambedkarite ideals and feminist sensibilities, the play depicts how political tactics used in the name of religion create divisions among innocent minds.

Maruthesha Kasapur_edited_edited.jpg
Shrunga_edited.jpg

Playwright: Shrunga BV

Shrunga BV is an actor, puppeteer, audiobook narrator, and translator, based in Bangalore. Having been introduced to theatre in 2004, he has worked with many theatre groups and renowned directors across India and Germany. He has played the lead role in many critically acclaimed feature films in Kannada, including "Harikatha Prasanga" and "19.20.21". He won the best-actor award at the Mahendra Excellence for Theatre Awards, 2019. He was a fellow at the Berliner Festspiele (Theatertreffen) - 2021.

Title: ಎಲ್.ಬಿ.ಡಬ್ಲ್ಯೂ

 

ಬೆಂಗಳೂರು, 1996.

ಪ್ರಜ್ವಲ್, 16 ವರ್ಷದ ಕ್ರಿಕೆಟ್ ಆಕಾಂಕ್ಷಿ. ಅವನು ಬಾಯಿ ಬಿಟ್ರೆ ಮಾತು ನಿಲ್ಲಿಸಲ್ಲ ಎಂದು ಎಲ್ಲರೂ ದೂರ ಓಡುತ್ತಾರೆ. ಅವನು Under - 16 Bangalore Zone ಗೆ select ಆಗಲು ಇದು ಕೊನೆಯ ಅವಕಾಶ. ಆದರೆ ಅವನ bat ಮುರಿದು ಹೋಗಿದೆ.

ವೈಭವ್, 14 ವರ್ಷದ cricket ಪಟು. 'ಬಾಲಪ್ರತಿಭೆ' ಎಂದು ಕರೆಸಿಕೊಳ್ಳುವ ಅವನು ಪ್ರಜ್ವಲ್ ನ club ನಲ್ಲೇ ಆಡುತ್ತಾನೆ. ಆದರೆ ಅವನ ವ್ಯಂಗ್ಯತೆಯಿಂದ ಎಲ್ಲರೂ ದೂರ ಓಡುತ್ತಾರೆ. ಸದ್ಯಕ್ಕೆ Under 16 trials ನಲ್ಲಿ ತನ್ನ ಸರದಿಗಾಗಿ ಕಾಯುತ್ತಿದ್ದಾನೆ.

ಈಗ, ಪ್ರಜ್ವಲ್ ಗೆ ವೈಭವ್ ನ bat ಬೇಕಿದೆ!

ಈ ಅನಿರೀಕ್ಷಿತ ಭೇಟಿ ಅವರಿಬ್ಬರಿಗೆ, ಮುರಿದ bat ಗಳು, ಹಂಚಿಕೊಂಡ ಕನಸುಗಳು ಮತ್ತು ಉದ್ವೇಗದ ನಿರ್ಧಾರಗಳ ಜಗತ್ತನ್ನು ತೆರೆದಿಡುತ್ತದೆ.

"L.B.W.", 1996 ಬೆಂಗಳೂರಿನಲ್ಲಿ ನಡೆಯುವ, ಕ್ರಿಕೆಟ್ ಮತ್ತು ಸ್ನೇಹದ ಕತೆ.

 

Title: L.B.W

 

Bangalore, 1996.

Prajwal is a 16 year old cricket aspirant. People run away from him because he talks too much. This is his last attempt to play cricket for Under-16 Bangalore. But his bat is broken.

Vaibhav is a 14 year old cricket prodigy playing at the same club as Prajwal. No one talks to him because he is sarcastic. He is awaiting his turn at the Under-16 trials as well.

Now Prajwal decides to ask Vaibhav for his bat!

This unexpected meeting opens them up to a world of broken bats, shared dreams and impulsive decisions.

L.B.W. is the story of friendship and cricket in 1996 Bangalore.

Playwright: Sumadhura Rao

ಸುಮಧುರ, ಬರಹಗಾರ್ತಿ, ರಂಗಭೂಮಿ ಕಸುಬುಗಾರ್ತಿ, ಕೋಡರ್. ೧೯೯೩ರಲ್ಲಿ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯಲ್ಲಿ ಜನನ. ಚಿಕ್ಕಂದಿನಿಂದ ಪೋಷಕರು, ಸಂಬಂಧಿಕರಿಗಾಗಿ ಕಥೆಕಟ್ಟುತ್ತಾ ಕಟ್ಟುತ್ತಾ, ಕೆಲಸದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಕಥೆಯನ್ನವಲಂಬಿಸಿದವಳು. ಸದ್ಯ ಬ್ಲಾಗ್ನಲ್ಲಿ ಕವಿತೆ ಬರೆಯುವವಳು, ಒಂದು ದಿನ ಪ್ರಕಟಿತ ಲೇಖಕಿಯಾಗುವ ಕನಸು ಕಂಡವಳು. ಸಂಚಯಕ್ಕಾಗಿ, ಜಯಂತ ಕಾಯ್ಕಿಣಿ ಕಥೆಯಾಧರಿಸಿದ “ಒಳಾಂಗಣ” ನಾಟಕದ ನಿರ್ದೇಶಕಿ. ಬದುಕಿನ ಪಾತ್ರ ಭಾರವಾದಾಗ ಯಕ್ಷಗಾನದ ಪಾತ್ರಧಾರಿ. ೨೦೧೫ರಲ್ಲಿ ಇಂಜಿನಿಯರಿಂಗ್ನ ಪದವಿ. ೨೦೧೯ರಲ್ಲಿ ರಂಗಭೂಮಿ ಡಿಪ್ಲೊಮಾ. ನೀನಾಸಂ ಹಾಗೂ ಸಂಚಯ ತಂಡದೊಂದಿಗೆ ರಂಗಭೂಮಿ ಒಡನಾಟ. ನಿರಂತರ ಓದುವುದು, ತೋಚಿದ್ದೆಲ್ಲ ಗೀಚುವುದು ಹವ್ಯಾಸ.

Title: ಸಹಪ್ರಯಾಣಿಕರ ಗಮನಕ್ಕೆ, ದಾರಿ ತಿರುವಾಗಿದೆ ಎಚ್ಚರಿಕೆ!

 

ಕರಾವಳಿಯ ಹಳ್ಳಿಯೊಂದರಲ್ಲಿ ಅಪ್ಪ ಮತ್ತು ಅಣ್ಣನ ಜೊತೆ ವಾಸವಿರುವ ಮಾನಸ ಎಂಬ ಹುಡುಗಿಯ ಕಥೆ ಇದು. ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಬೇಕು ಎಂಬುದು ಅವಳ ಆಸೆ.

ತಾನು ಸ್ವತಂತ್ರವಾಗಿ ಓಡಾಡಲು ಒಂದು ಸ್ಕೂಟಿ ಇದ್ದರೆ ಸಾಕು ಎಂದು ನಂಬುವ ಅವಳು, ಹೇಗೋ ಹಠ ಹಿಡಿದು ಅಪ್ಪನ ಹತ್ತಿರ ಸ್ಕೂಟಿ ಕೊಡಿಸಿಕೊಳ್ಳುತ್ತಾಳೆ. ಆದರೆ ಆ ಸ್ಕೂಟಿ ಕಲಿಯುವ ಹಾದಿಯಲ್ಲಿ ಅಪ್ಪನಿಗೆ ಅಪಘಾತವಾಗಿ, ಮನೆಯಲ್ಲಿ ಗೊಂದಲ ಶುರುವಾಗುತ್ತದೆ. ಅಣ್ಣನ ರಾಜಕೀಯ ಆಸೆಗಳು ಮತ್ತು ಕುಟುಂಬದ ಜಗಳಗಳ ನಡುವೆ ಸಿಲುಕುವ ಮಾನಸಳಿಗೆ, ಬರೇ ಸ್ಕೂಟಿಯಿಂದ ಮಾತ್ರ ಜೀವನ ಬದಲಾಗುವುದಿಲ್ಲ ಎಂಬುದು ತಿಳಿಯುತ್ತದೆ.

ತನ್ನ ಹಾದಿಗೆ ಅಡ್ಡ ಬರುವ ಅಪ್ಪನ ಪುತ್ರವ್ಯಾಮೋಹ ಮತ್ತು ಅಣ್ಣನ ಹಠವನ್ನು ಎದುರಿಸಿ ಮಾನಸ ತನ್ನ ಗುರಿ ತಲುಪುತ್ತಾಳಾ? ತನ್ನ ಸ್ವಾತಂತ್ರ್ಯಕ್ಕಾಗಿ ಅವಳು ಮಾಡುವ ಪ್ರಯತ್ನಗಳೇ ಈ ನಾಟಕದ ಜೀವಾಳ.

 

Title: Sahaprayaanikara gamanakke, daari thiruvaagide eccharike!

 

This is the story of Manasa, a young woman living with her father and brother in a coastal village. Her only wish is to make her own decisions in life.

Believing that a scooter is all she needs to be independent, she manages to convince her father to get her a scooty. However, while she is learning to ride, her father meets with an accident, causing chaos at home. Caught between her brother’s political ambitions and family feuds, Manasa realizes that a scooter alone cannot change her life.

Faced with her father’s favoritism toward his son and her brother’s stubbornness, will Manasa reach her goal? Her struggle for freedom is the heart of this play.

Sumadhura Rao_edited.jpg
Usha Kattemane_edited.jpg

Playwright: Usha Kattemane

ಪ್ರವಾಸ, ಓದು ಮತ್ತು ಬರವಣಿಗೆ ನನ್ನ ಪ್ರಿಯ ಹವ್ಯಾಸ. ಈಗ ಕೃಷಿ ನನ್ನ ಉದ್ಯೋಗ. ಪ್ರಜಾವಾಣಿ ಮತ್ತು ಉದಯವಾಣಿಯಲ್ಲಿ ನಾಟಕ ಪ್ರದರ್ಶನಗಳ ಬಗ್ಗೆ ಅಂಕಣ ಬರೆಯುತ್ತಿದ್ದೆ. ಈ ರೀತಿಯಾಗಿ ನಾಟಕಗಳ ಬಗ್ಗೆ ಆಸಕ್ತಿ ಮೂಡಿತು. ಕ್ರಮೇಣ ಸ್ಪರ್ಧೆಗಳಿಗಾಗಿ ನಾಟಕ ಬರೆಯತೊಡಗಿದೆ. ಬಹುಮಾನಗಳು ಬಂದವು. ಮುಖ್ಯವಾಗಿ ನಾಟಕ ಅಕಾಡಮಿ ಆರಂಭಿಸಿದ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂತು. ಆಮೇಲೆ ಧಾರವಾಡ, ಶಿವಮೊಗ್ಗದ ಸ್ಪರ್ಧೆಗಳಲೂ ಬಹುಮಾನಗಳು ಬಂದವು. ಈ ವರ್ಷ ಪ್ರಜಾವಾಣಿ ಏರ್ಪಡಿಸಿದ್ದ ಮೊದಲ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂತು. ಕೆಲವು ರಂಗತಂಡಗಳಿಗೂ ಅವರು ಕೇಳಿದಂತೆ ಬರೆದು ಕೊಟ್ಟೆ. ಅವು ರಂಗವನ್ನೇರಿದವು.

Title: ಅಂಗಾರ

 

ತುಳುನಾಡಿನ ಕೊರಗ ಸಮುದಾಯದ ವಿದ್ಯಾವಂತ ಯುವಕ ಅಂಗಾರ ಮತ್ತು ಗದ್ದೆ ಮಾಲೀಕಳ ಮಗಳು ನೇತ್ರಾ ಅವರ ಸುತ್ತ ಸಾಗುವ ಕಥೆ ಇದು.

ತಲೆಮಾರುಗಳಿಂದ ನಡೆದುಕೊಂಡು ಬಂದಿರುವ 'ಅಜಲು ಪದ್ಧತಿ'*ಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ನಿಲ್ಲುವ ಅಂಗಾರ, ಸಂಪ್ರದಾಯದ ಹೆಸರಿನಲ್ಲಿ ತನ್ನ ಸಮುದಾಯದ ಮೇಲೆ ಹೇರಲಾದ ಆಚರಣೆಗಳನ್ನು ಮುಂದುವರಿಸಲು ನಿರಾಕರಿಸುತ್ತಾನೆ. ಇನ್ನೊಂದೆಡೆ, ಮಹಿಳೆಯರಿಗೆ ಪ್ರವೇಶವಿಲ್ಲದ ಕಂಬಳದ ಕಣಕ್ಕೆ ತಾನು ಇಳಿಯಲೇಬೇಕು ಎಂಬ ದೃಢ ನಿರ್ಧಾರವನ್ನು ನೇತ್ರಾ ತೆಗೆದುಕೊಳ್ಳುತ್ತಾಳೆ.

ಇವೆಲ್ಲದರ ನಡುವೆ, ಈ ಇಬ್ಬರ ನಡುವೆ ಪ್ರೀತಿ ಅರಳುತ್ತದೆ. ಮೇಲ್ವರ್ಗದ ತುಳಿತ ಮತ್ತು ಸಮುದಾಯದ ಅಸ್ಮಿತೆಯ ನಡುವೆ ಸಿಲುಕುವ ಅಂಗಾರ ಅಂತಿಮವಾಗಿ ಯಾವ ದಾರಿಯನ್ನು ಆರಿಸಿಕೊಳ್ಳುತ್ತಾನೆ? ನೇತ್ರಾ ಮತ್ತು ಅಂಗಾರನ ಈ ಹೋರಾಟ ಯಶಸ್ವಿಯಾಗುತ್ತದೆಯೇ?

Title: Angaara

 

This is the story of Angara, an educated young man from the Koraga community of Tulunadu, and Nethra, the daughter of a local landlord. Standing against social evils like the generations-old 'Ajalu system,' Angara refuses to continue the rituals forced upon his community in the name of tradition. Meanwhile, Nethra takes a firm stand, deciding that she must enter the Kambala arena, a space traditionally forbidden to women.

In between all this, a romance blossoms between the two. Caught between the oppression of the dominant classes and his own community’s identity, which path will Angara ultimately choose? Will Angara and Nethra’s struggle for change succeed?


While the remaining four scripts won't be produced this year,
we at Kusumaale believe that scripts are not good or bad, some are just more ready than others.

And the ones that are not ready yet, will also be included in the Kusumaale Festival
as dramatised readings, with a view to producing them later.

These playwrights are:

 

Kusumaale

ಡ್ರಾಮಾ ಲೈಬ್ರರಿ (thedramalibrary.com) ದೇಶದಾದ್ಯಾಂತ ಪ್ರಕಟವಾಗಿರುವ ನಾಟಕಗಳ ಜೀವಂತ ಆರ್ಕೈವ್ ಆಗಿರುವುದರ ಜೊತೆಗೆ, ಇನ್ನೊಂದು ಮುಖ್ಯವಾದ ಉದ್ದೇಶವನ್ನು ಹೊಂದಿದೆ – ಈಗಿರುವ ನಾಟಕಗಳ ಸಂಪತ್ತಿಗೆ ಹೊಸದನ್ನು ಸೇರ್ಪಡೆಗೊಳಿಸುವುದು, ರಂಗಭೂಮಿಯಲ್ಲಿ ಹೊಸ ಬರಹಗಾರರು ಮತ್ತು ಹೊಸ ಬರವಣಿಗೆಗಳ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸುವುದು ಮತ್ತು ಸಾಮರ್ಥ್ಯವನ್ನು ರೂಪಿಸುವುದು.

 

2023ರಲ್ಲಿ, ನಾವು Brecht@2023 ಎಂಬ ಕಾರ್ಯಕ್ರಮದ ಅಡಿಯಲ್ಲಿ ಎರಡು ಹೊಸ ನಾಟಕಗಳನ್ನು ಆಜ್ಞಾಪಿಸಲು ಭಾಗ್ಯವಂತರಾಗಿದ್ದೇವೆ. ಈ ಎರಡು ನಾಟಕಗಳು – ‘Saheb No Coat’ (ಗುಜರಾತಿ) ಅಭವಿಮನ್ಯು ಆಚಾರ್ಯ ಅವರಿಂದ ಮತ್ತು 'Uncocked' (ಇಂಗ್ಲಿಷ್) ವಿ. ಬಾಲಕೃಷ್ಣನ್ ಅವರಿಂದ – ಬ್ರೆಕ್ಟ್ ಅವರ ಎರಡು ಕೃತಿಗಳಿಗೆ ಪ್ರತಿಕ್ರಿಯೆಯಾಗಿ ಬರೆಯಲ್ಪಟ್ಟಿದ್ದು, ಈಗ ಡ್ರಾಮಾ ಲೈಬ್ರರಿಯ ಸಂಪತ್ತಿಗೆ ಹೆಮ್ಮೆಯ ಸೇರ್ಪಡೆಗಳಾಗಿವೆ.

 

ಕಳೆದ ವರ್ಷ, ನಾವು ‘Third Bell’ ಎಂಬ ಯೋಜನೆಯ ಮೊದಲ ವರ್ಷದ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇದು, ಮೂರು ವರ್ಷಗಳ ಕಾಲ ಪ್ರತಿ ವರ್ಷ ಎರಡು ಹೊಸ ನಾಟಕಗಳನ್ನು ಬಂಗಾಲಿ ಭಾಷೆಯಲ್ಲಿ ಆಜ್ಞಾಪಿಸಲು ಉದ್ದೇಶಿತವಾಗಿದೆ.

 

Third Bell ನ ಮೊದಲ ಆವೃತ್ತಿ ಈಗ ಪೂರ್ಣಗೊಂಡಿದೆ; ಟಿಟಾಸ್ ಅವರ 'Mon Paboner Nao' ಮತ್ತು ರಿತೋ ದೀಪ್ ಅವರ 'Janakrajar Pala' ಎಂಬ ಎರಡು ನಾಟಕಗಳು ಈಗ TDL ನಲ್ಲಿ ಲಭ್ಯವಿವೆ. ಈ ನಾಟಕಗಳನ್ನು ರಂಗಸ್ಥಳದಲ್ಲಿ ಪ್ರದರ್ಶಿಸಲು ಮತ್ತು ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸಲು ಪ್ರಯತ್ನಗಳು ನಡೆಯುತ್ತಿವೆ.

 

ಈ ವರ್ಷ, ನಾವು ಸಡಗರದಿಂದ ಘೋಷೋಸುತ್ತಿರುವ ಕಾರ್ಯಕ್ರಮ –

 

ಕುಸುಮಾಲೆ

ಗಿರೀಶ್ ಕಾರ್ನಾಡ್ ಕನ್ನಡ ನಾಟಕ ಬರವಣಿಗೆಯ ಫೆಲೋಶಿಪ್

 

8 ತಿಂಗಳ ಕಾಲ 10 ಜನ ನಾಟಕಕಾರರಿಗೆ ನಾಟಕ ಬರೆಯುವ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಅವರು ಏನನ್ನು ಬರೆಯಲು ಇಚ್ಛಿಸುತ್ತಾರೆ ಎಂಬುದನ್ನು ಅನ್ವೇಷಿಸಲು ಹಾಗೂ ಅದನ್ನು ಅವರ ಉದ್ದೇಶ ಮತ್ತು ಶಕ್ತಿಗೆ ಅನುಗುಣವಾಗಿ ಹೇಗೆ ಬರೆಯಬಹುದು ಎಂಬುದನ್ನು ಕಲಿಸಿಕೊಡಲಾಗುತ್ತದೆ.

 

ಈ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎರಡು 8 ದಿನಗಳ residencyಯನ್ನು  ಒಳಗೊಂಡಿರುತ್ತದೆ. ಈ residency, ಬರವಣಿಗೆ ಅಭ್ಯಾಸಗಳು, improvisationಗಳು, ನಾಟಕ ಓದುಗಳು, ಅತಿಥಿ ಉಪನ್ಯಾಸಗಳು, ನಾಟಕ ಹಾಗೂ ಚಿತ್ರ ಪ್ರದರ್ಶನಗಳು ಮತ್ತು ಒಳ್ಳೆಯ ಊಟ ಮತ್ತು ಚರ್ಚೆಗಳನ್ನು ಒಳಗೊಂಡಿರುತ್ತದೆ. 

 

ಪ್ರತಿ residencyಯ  ನಂತರ, ಲೇಖಕರು ಮಾರ್ಗದರ್ಶನದೊಂದಿಗೆ ಹಾಗೂ ನಿಗದಿತ ಪ್ರತಿಕ್ರಿಯೆಗಳೊಂದಿಗೆ ತಮ್ಮ ನಾಟಕಗಳನ್ನು ಬರೆಯತಕ್ಕದ್ದು.

 

ಈ ಪ್ರಕ್ರಿಯೆಯ ಕೊನೆಯಲ್ಲಿ ಮತ್ತು ಎರಡನೇ ಕರಡುಗಳ ನಂತರ, ಹತ್ತು ನಾಟಕಗಳಲ್ಲಿ ನಾಲ್ಕು ನಾಟಕಗಳನ್ನು ಆಯ್ಕೆ ಮಾಡಿ ಒಂದು ನಾಟಕೋತ್ಸವದಲ್ಲಿ  ಪ್ರಸ್ತುತಪಡಿಸಲಾಗುತ್ತದೆ.

 

ಹೀಗಾಗಿ ನೀವು ಯಾವುದೇ ಮಟ್ಟದ ಅನುಭವ ಹೊಂದಿರುವ ನಾಟಕಕಾರರಾಗಿದ್ದರೆ, ಮತ್ತು ನೀವು ಕನ್ನಡ ಮಾತನಾಡಿ, ಓದಿ, ಬರೆದು, ಅರ್ಥಮಾಡಿಕೊಳ್ಳಬಹುದಾದರೆ ಮತ್ತು ಈ ಫೆಲೋಶಿಪ್‌ನಲ್ಲಿ ಆಸಕ್ತರಾಗಿದ್ದರೆ, ದಯವಿಟ್ಟು ಈ ಫಾರ್ಮ್ ಅನ್ನು ಭರ್ತಿ ಮಾಡಿ.

 

ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: July 20, 2025

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು FAQ ವಿಭಾಗ ಓದಿ ಅಥವಾ vivek@bhashacentre.com ಗೆ ಇಮೇಲ್ ಮಾಡಿ. 

 

FAQs

 ಪಾತ್ರತೆಯ ಅಂಶಗಳು

  • ಅರ್ಜಿದಾರರು 2025ರ ಜನವರಿ 1ರ ವೇಳೆಗೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.

  • ಅರ್ಜಿದಾರರು ಕನ್ನಡದಲ್ಲಿ (ಯಾವುದೇ ಪ್ರಾಂತಭಾಷೆಯಾದರೂ ಸರಿ) ನಿಪುಣರಾಗಿರಬೇಕು.

  • ಅರ್ಜಿದಾರರು ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರೂ, ಬೆಂಗಳೂರಿನಲ್ಲಿ ನಡೆಯುವ residencyಯಲ್ಲಿ ಹಾಜರಾಗಿ ಭಾಗವಹಿಸಲು ಮತ್ತು ಯೋಜನೆಯ ಎಲ್ಲಾ ಕಾಲಮಿತಿಗಳಿಗೆ ಬದ್ಧರಾಗಿರಲು ತಯಾರಿರಬೇಕು.

  • ಮೊದಲ ಬಾರಿಗೆ ನಾಟಕ ಬರೆಯುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಾಟಕಕಾರರ ಅನುಭವ ಅವಶ್ಯವಿಲ್ಲ, ಆದರೆ ರಂಗಭೂಮಿಯಲ್ಲಿ ಅನುಭವವಿದ್ದರೆ, ಅದು ನಿಮ್ಮ ಅರ್ಜಿ ಪರಿಗಣನೆಗೆ ಸಹಾಯಕವಾಗುತ್ತದೆ.

ಕುಸುಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗುತ್ತದೆಯೆ?

ಕುಸುಮಾಲೆ ಒಂದು ಉಚಿತ ಕಾರ್ಯಕ್ರಮ. ಆಯ್ಕೆಯಾದ ಅಭ್ಯರ್ಥಿಗಳು ಹೊರೆವಹಿಸಬೇಕಾಗಿರುವ ಏಕೈಕ ವೆಚ್ಚವೆಂದರೆ, residency ಸ್ಥಳ, ಬೆಂಗಳೂರಿನ ‘ವಿಸ್ತಾರ್’ಗೆ ಬಂದು ಹೋಗುವ ಪ್ರಯಾಣದ ಖರ್ಚು ಮಾತ್ರ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು?

ಅರ್ಜಿದಾರರು ಅರ್ಜಿಪತ್ರವನ್ನು ಕೇವಲ ಕನ್ನಡದಲ್ಲೇ ಭರ್ತಿ ಮಾಡಬೇಕು.

 

ಅರ್ಜಿಯಲ್ಲಿ ನಿಮ್ಮ ಅನುಭವ, ನಿರೀಕ್ಷೆಗಳ ಕುರಿತಾಗಿ ಕೆಲವು ಪ್ರಶ್ನೆಗಳಿರುತ್ತವೆ. ಜೊತೆಗೆ, ನೀವು ಬರೆದ ನಾಟಕದ ಒಂದು ಉದಾಹರಣೆ (ಸಣ್ಣ ನಾಟಕ ಅಥವಾ ಕೆಲವು ದೃಶ್ಯಗಳಾದರೂ ಸರಿ) ಸಲ್ಲಿಸಬೇಕಾಗುತ್ತದೆ.

 

ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ July 20, 2025, ಸಂಜೆ 6 ಗಂಟೆ (ಭಾರತೀಯ ಪ್ರಮಾಣಿತ ಸಮಯ).

 

ಸುಮಾರು 15 ಅರ್ಜಿಗಳನ್ನು ಪ್ರಾಥಮಿಕವಾಗಿ ಆಯ್ದುಕೊಳ್ಳಲಾಗುತ್ತದೆ, ಮತ್ತು ಆಯ್ದ ಅರ್ಜಿದಾರರು ಕಾರ್ಯಕ್ರಮದ ಮಾರ್ಗದರ್ಶಕರೊಂದಿಗೆ ಒಂದು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದದ ಉದ್ದೇಶ ಸಂದೇಹಗಳ ನಿವಾರಣೆ ಹಾಗೂ ಸಂವಾದದ ಮೂಲಕ ಈ ಕಾರ್ಯಕ್ರಮವು ನಿಜಕ್ಕೂ ಆ ಅರ್ಜಿದಾರರಿಗೆ ಸಹಾಯವಾಗುತ್ತದೆಯೆ ಎಂದು ಖಚಿತಪಡಿಸಿಕೊಳ್ಳುವುದು.

 

ಈ ಸಂವಾದಗಳು ಆನ್ಲೈನ್‌ನಲ್ಲಿ ನಡೆಯುತ್ತವೆ ಮತ್ತು ಪರಸ್ಪರ ಅನುಕೂಲಕರ ಸಮಯಕ್ಕೆ ನಿಗದಿಪಡಿಸಲಾಗುತ್ತದೆ.

 

ಈ ಪ್ರಾಥಮಿಕ ಪಟ್ಟಿಯಿಂದ, 10 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆಮಾಡಲಾಗುತ್ತದೆ. 

ನೆನಪಿನಲ್ಲಿಡಬೇಕಾದ ಮುಖ್ಯ ದಿನಾಂಕಗಳು

ಜುಲೈ 20: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಸಂಜೆ 6 ಗಂಟೆ, IST)

ಜುಲೈ 25 ರಿಂದ ಜುಲೈ 28: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳೊಂದಿಗೆ ವೈಯಕ್ತಿಕ ಸಂಭಾಷಣೆ

ಆಗಸ್ಟ್ 1: ಆಯ್ಕೆಯಾದ 10 ಭಾಗವಹಿಸುವವರ ಘೋಷಣೆ

ಆಗಸ್ಟ್ 31 ಸಂಜೆ: ಎಲ್ಲರೂ ಬೆಂಗಳೂರಿನ ವಿಸ್ತಾರ್‌ಗೆ ಮೊದಲ Residency ಗೆ ಹಾಜರಾಗುವುದು

ಸೆಪ್ಟೆಂಬರ್ 1 ರಿಂದ 8: Residency 1

ಸೆಪ್ಟೆಂಬರ್ 9 ಬೆಳಗ್ಗೆ: ಎಲ್ಲರೂ ‘ವಿಸ್ತಾರ್‌’ ನಿಂದ ಹೊರಡುವುದು

ನವೆಂಬರ್ 10: ಮೊದಲ ಕರಡು ಸಲ್ಲಿಸಲು ಕೊನೆಯ ದಿನ

ಡಿಸೆಂಬರ್ 9 ಸಂಜೆ: ಎರಡನೇ Residency ಗೆ ಎಲ್ಲರೂ ‘ವಿಸ್ತಾರ್‌’ ನಲ್ಲಿ ಹಾಜರಾಗುವುದು

ಡಿಸೆಂಬರ್ 10 ರಿಂದ 17: Residency 2

ಡಿಸೆಂಬರ್ 18 ಬೆಳಗ್ಗೆ: ಎಲ್ಲರೂ ‘ವಿಸ್ತಾರ್‌’ ನಿಂದ ಹೊರಡುವುದು

ಜನವರಿ 20: ಎರಡನೇ ಕರಡು ಸಲ್ಲಿಸಲು ಕೊನೆಯ ದಿನ

ಜನವರಿ 31: ನಿರ್ಮಾಣಕ್ಕೆ ಆಯ್ಕೆಯಾದ ನಾಲ್ಕು ನಾಟಕಗಳ ಘೋಷಣೆ

ಫೆಬ್ರವರಿ 10: ನಾಟಕೋತ್ಸವದ ದಿನಾಂಕ ಮತ್ತು ಕಾರ್ಯಕ್ರಮಗಳ ಘೋಷಣೆ

ನಾಟಕೋತ್ಸವದ ವಿವರಗಳೇನು? ಈ ನಾಟಕಗಳನ್ನು ಯಾರು ನಿರ್ದೇಶಿಸುತ್ತಾರೆ?

ನಾಟಕೋತ್ಸವವು ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಆಯ್ಕೆಮಾಡಲಾದ 10 ನಾಟಕಗಳಲ್ಲಿ 4 ನಾಟಕಗಳನ್ನು ಸಂಪೂರ್ಣವಾಗಿ ನಿರ್ವಹಿಸಿ, ನಿರ್ಮಿಸಲಾಗುತ್ತದೆ. ಉಳಿದ 6 ನಾಟಕಗಳನ್ನು ಸರಳವಾಗಿ ಅಭ್ಯಾಸಗೊಂಡ ಓದುಗಳ ರೂಪದಲ್ಲಿ ವೇದಿಕೆಗೇರಿಸಲಾಗುತ್ತದೆ.

 

ಈ ಹಬ್ಬದಲ್ಲಿ ಉಪನ್ಯಾಸಗಳು, ಸಂವಾದಗಳು, ಕಾರ್ಯಾಗಾರಗಳು ಮುಂತಾದ ಇತರೆ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.

 

ನಿರ್ಮಿಸಲು ಆಯ್ಕೆಯಾಗುವ 4 ನಾಟಕಗಳನ್ನು, ನಿರ್ಮಲಿಚ್ಚಿಸುವ ನಿರ್ದೇಶಕರಿಗೂ, ತಂಡಗಳಿಗೂ ನೀಡಲಾಗುತ್ತದೆ. ಹೊಸ ನಾಟಕಗಳೊಂದಿಗೆ ಹಾಗೂ ಹೊಸ ನಾಟಕಕಾರರೊಂದಿಗೆ ಅರ್ಥಪೂರ್ಣವಾಗಿ ಕೆಲಸ ಮಾಡಲು ಅರ್ಹತೆ ಹೊಂದಿರುವವರು ಈ ನಾಟಕಗಳನ್ನು ನಿರ್ಮಿಸಲು, ನಿರ್ದೇಶಿಸಲು, ಆಯ್ಕೆಗೊಳ್ಳುತ್ತಾರೆ. ನಾಟಕಕ್ಕೆ ಯೋಗ್ಯತೆ ದೊರಕುವಂತಾಗಬೇಕು ಎಂಬುದು ನಮ್ಮ ಉದ್ದೇಶ. 

 

ಪ್ರತಿ ತಂಡಕ್ಕೆ ಈ ನಾಟಕವನ್ನು ನಿರ್ಮಿಸಲು ರೂ. 1 ಲಕ್ಷ ರೂ. ಬಿತ್ತನೆ ಧನ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಕನಿಷ್ಠ ಎರಡು ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಈ ಎರಡು ಪ್ರದರ್ಶನಗಳ ಎಲ್ಲ ಖರ್ಚುಗಳನ್ನು ಕಾರ್ಯಕ್ರಮವೇ ಹೊತ್ತುಕೊಳ್ಳುತ್ತದೆ ಮತ್ತು ಟಿಕೆಟ್ ಮಾರಾಟದ 50% ಮೊತ್ತವನ್ನು ತಂಡಕ್ಕೆ ನೀಡಲಾಗುತ್ತದೆ.

 

ತದನಂತರ, ಆ ನಾಟಕ ಆ ತಂಡದ ಸ್ವತಂತ್ರತ್ವಕ್ಕೆ ಬಿಟ್ಟದ್ದಾಗುತ್ತದೆ. 

 

ನಾಟಕೋತ್ಸವದ ಅಂತಿಮ ದಿನಾಂಕವನ್ನು 2025ರ ಕೊನೆ ವೇಳೆಗೆ ಘೋಷಿಸಲಾಗುತ್ತದೆ.

ನಾನು ಆಯ್ಕೆ ಆದರೆ, ಮತ್ತು ನನ್ನ ನಾಟಕ ನಾಟಕೋತ್ಸವದಲ್ಲಿ ನಿರ್ಮಿಸಲು ಆಯ್ಕೆಯಾದರೆ, ನಾನು ನನ್ನ ನಾಟಕವನ್ನು ನಿರ್ದೇಶಿಸಬಹುದೆ?

ಈ ಪ್ರಕ್ರಿಯೆಯಲ್ಲಿ ಲೇಖಕರು ತಮ್ಮದೇ ನಾಟಕವನ್ನು ನಿರ್ದೇಶಿಸಲು ಅಥವಾ ನಿರ್ಮಿಸಲು ಪ್ರೋತ್ಸಾಹಿಸಲಾಗುವುದಿಲ್ಲ.

 

ಒಂದು ನಾಟಕಕಾರನ ಪ್ರಮುಖ ಹೊಣೆಗಾರಿಕೆ ಎಂದರೆ, ನಿರ್ದೇಶಕರ ವಿಭಿನ್ನ ವಿವರಣೆಗಳ ನಡುವೆಯೂ ನಾಟಕ ತನ್ನ ಸಾಮರ್ಥ್ಯದಿಂದ ನಿಲ್ಲಬಲ್ಲಂತೆ ಬರೆಯುವುದು.

 

'ನಾನು ನಿರ್ದೇಶಿಸಬಹುದಾದ ಹಾಗೂ ನಂತರ ಸರಿಪಡಿಸಬಹುದಾದ' ಎಂಬ ನಾಟಕ ಪ್ರತಿಯು, ಶಕ್ತಿಯುತವಾದ ನಾಟಕವನ್ನು ಬರೆಯಲು ಕಲಿಯುವ ಪ್ರಕ್ರಿಯೆಗೆ ತೀವ್ರವಾಗಿ ಹಾನಿಕರವಾಗಿದೆ.

​ನಾಟಕದ copyright ಯಾರದ್ದಾಗಿರುತ್ತದೆ?

ನಾಟಕಕಾರರು ಸೃಜಿಸಿದ ಕೃತಿಗೆ ಸಂಬಂಧಿಸಿದ ಎಲ್ಲಾ ನೈತಿಕ ಮತ್ತು ಕಾನೂನು ಹಕ್ಕುಗಳು ನಾಟಕಕಾರರಲ್ಲಿಯೇ ಇರುತ್ತವೆ.

 

ಪೂರ್ಣಗೊಂಡ ನಾಟಕದ ಪ್ರತಿ TDL, ಅಂದರೆ ಭಾಷಾ ಸೆಂಟರ್‌ನ ಆನ್‌ಲೈನ್ ಗ್ರಂಥಾಲಯದಲ್ಲಿ, ರಂಗೋತ್ಸವದಲ್ಲಿ ಪ್ರದರ್ಶನವಾದ ದಿನದಿಂದ ಕನಿಷ್ಠ ಒಂದು ವರ್ಷದ ವರೆಗೆ ಉಳಿಯಲಿದೆ.

FACILITATOR ಗಳ ವಿವರ 

Irawati Karnik (1).jpeg

ಇರಾವತಿ ಕಾರ್ನಿಕ್

ಇರಾವತಿ ಕಾರ್ನಿಕ್ ಮುಂಬೈನಲ್ಲಿರುವ ಲೇಖಕಿ, ನಾಟಕಕಾರ್ತಿ, ಚಿತ್ರಕಥೆಗಾರ್ತಿ, ಅನುವಾದಕಿ, ನಾಟಕ ಸಂಶೋಧಕಿ ಮತ್ತು ನಟಿಯೂ ಆಗಿದ್ದಾರೆ. ಅವರು ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಾರೆ.

 

ವಿಜಯ್ ತೆಂಡೂಲ್ಕರ್ ಅವರು ಸ್ಥಾಪಿಸಿದ, ಚೆತನ್ ದಾತಾರ್ ಮುನ್ನಡೆಸುತ್ತಿದ್ದ ತಂಡ ಅವಿಷ್ಕಾರ್ ನಲ್ಲಿ ಕೆಲಸ ಮಾಡುವ ಮೂಲಕ, ಇರಾವತಿಯ ನಾಟಕಯಾತ್ರೆ 2003ರಲ್ಲಿ ಆರಂಭವಾಯಿತು. 

 

ನಂತರದ ದಿನಗಳಲ್ಲಿ ಇರಾವತಿ ಹಲವಾರು ಪ್ರಮುಖ ನಾಟಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡ ನಾಟಕಗಳನ್ನು ರಚಿಸಿದ್ದಾರೆ.

 

ಅವರು ಅನುವಾದಿಸಿದ ಅನೇಕ ಬರಹಗಳು Oxford University Press ಮೂಲಕ ಪ್ರಕಟವಾಗಿದೆ.

 

ಇರಾವತಿ ಲೇಖನ ಮತ್ತು ಚಿತ್ರಕಥೆ ಕ್ಷೇತ್ರದಲ್ಲಿಯೂ ಉನ್ನತ ಮಟ್ಟದಲ್ಲಿ ಕೆಲಸಮಾಡಿದ್ದು, ಅವರು ಬರೆದ ಹಲವಾರು ಚಲನಚಿತ್ರಗಳು ಪ್ರಶಸ್ತಿ ಗಳಿಸಿವೆ.

 

Sir JJ School of Fine Arts  ಶಾಲೆಯ ವಿದ್ಯಾರ್ಥಿನಿಯಾಗಿದ್ದ ಇರಾವತಿ, ಭಾರತದ ಸಮಕಾಲೀನ ಕಲೆಗಳ ಸಂಶೋಧನೆ ಮತ್ತು ದಾಖಲಾತಿಯನ್ನೂ ಮಾಡಿರುತ್ತಾರೆ. ಅವರ ಲೇಖನ ಹಾಗೂ ಅನುವಾದಗಳು ಬೋಧನಾ ಆರ್ಟ್ಸ್ & ರಿಸರ್ಚ್ ಫೌಂಡೇಶನ್ ಪ್ರಕಟಿಸಿದ ಪುಸ್ತಕಗಳಲ್ಲಿ ಲಭ್ಯವಿದೆ.

 

ಈಗ ಇರವತಿ ಕಾರ್ನಿಕ್ Drama School Mumbai (DSM) ನ ಅಕಾಡೆಮಿಕ್ ಮುಖ್ಯಸ್ಥೆಯಾಗಿದ್ದಾರೆ.

 

1000167308.jpg

ಸಾತ್ವಿಕ್.ಎನ್.ಎನ್

ಸಾತ್ವಿಕ್.ಎನ್.ಎನ್, ಕಲಾ, ಮಾಧ್ಯಮ, ನಾಟಕ ಕ್ಷೇತ್ರದಲ್ಲಿ ಹಾಗೂ ಲೇಖಕರಾಗಿ ಹತ್ತ್ಕಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಕೆಲಸವು ನಾಟಕ, ನಾಗರಿಕ ಸಮಾಜ ಮತ್ತು ಶಿಕ್ಷಣ ಕ್ಷೆತ್ರದ ನಡುವಿನ ಅಂತರಕ್ಷೇತ್ರದಲ್ಲಿ ನಡೆಯುತ್ತದೆ.

 

ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಾಟಕಗಳ ಬರವಣಿಗೆ, ಅನುವಾದ, ನಿರ್ಮಾಣ ಹಾಗು ನಿರ್ದೇಶನದಲ್ಲಿ ಅನುಭವ ಹೊಂದಿದ್ದಾರೆ. 

 

Indian Ensemble ಮತ್ತು ರಂಗಶಂಕರದಲ್ಲಿ ಕೆಲಸ ಮತ್ತು ಕಲಿಕೆಯನ್ನು ಪ್ರಾರಂಭಿಸಿದ ಇವರು, 2018 ರಲ್ಲಿ Inlaks Scholarship ಪಡೆದು Goldsmiths, University of London ನಿಂದ MA in Writing for Performance and Dramaturgy ಪದವಿ ಗಳಿಸಿದ್ದಾರೆ.

Lakshmana KP.jpg

ಲಕ್ಷ್ಮಣ ಕೆ.ಪಿ.

ಲಕ್ಷ್ಮಣ ಕೆ.ಪಿ. ಜಂಗಮ ಕಲೆಕ್ಟಿವ್ ನ ಸ್ಥಾಪಕರಲ್ಲಿ ಒಬ್ಬರಾಗಿದ್ದು, ನಟ, ನಿರ್ದೇಶಕ, ಕವಿ ಮತ್ತು ಪ್ರದರ್ಶನ ಶಿಕ್ಷಕರಾಗಿದ್ದಾರೆ. ಅವರು 2018ರಲ್ಲಿ ಸಿಂಗಪುರದ Intercultural Theatre Institute ನಿಂದ  ಹಾಗೂ 2012ರಲ್ಲಿ ನೀನಾಸಂ ಥಿಯೇಟರ್ ಇನ್‌ಸ್ಟಿಟ್ಯೂಟ್ನಿಂದ ಪದವಿ ಪಡೆದಿದ್ದಾರೆ.

 

ಲಕ್ಷ್ಮಣ್ ಅವರ ಪ್ರದರ್ಶನಗಳು Dalit aesthetics ನ  ಅನ್ವೇಷಣೆಯತ್ತ ಕೇಂದ್ರಿತವಾಗಿವೆ. ಅವರ ಇತ್ತೀಚಿನ ನಾಟಕಗಳು – We the People of India, ದಕ್ಲಕಥಾ ದೇವಿ ಕಾವ್ಯ, ಮತ್ತು ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ – ದಲಿತ ರಾಜಕೀಯ ಆಧುನಿಕತೆ, ಸಾಂಸ್ಕೃತಿಕ ಸ್ಮರಣೆ, ಮತ್ತು ಸಾಮಾಜಿಕ ಅಸ್ತಿತ್ವದ ಕುರಿತು ಆಳವಾದ ಚಿಂತನೆ ನಡೆಸುತ್ತವೆ.

 

ಅವರ ನಾಟಕಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯ ಕಥಾವಸ್ತುಗಳು ಬಿಂಬಿತವಾಗಿರುವುದು ಸಾಮಾನ್ಯ.

 

ಸಮಕಾಲೀನ ನಾಟಕ ಕ್ಷೇತ್ರಕ್ಕೆ ಕೊಡುಗೆ ನೀಡಿದಕ್ಕಾಗಿ, ಅವರು 2023ರಲ್ಲಿ ಪ್ರತಿಷ್ಠಿತ ಶಂಕರ್ ನಾಗ್ ಥೀಯೇಟರ್ ಪ್ರಶಸ್ತಿ ಹಾಗೂ 2024ರಲ್ಲಿ ಡೆಕ್ಕನ್ ಹೆರಾಲ್ಡ್ ಚೇಂಜ್‌ಮೇಕರ್ ಪ್ರಶಸ್ತಿ ಗಳಿಸಿದ್ದಾರೆ.

 

ಲಕ್ಷ್ಮಣ್ ಪ್ರಕಟಿತ ಕವಿ ಆಗಿರುವುದರ ಜೊತೆಗೆ, ಭಾರತೀಯ ಸಮಾಜದ ಹಿಮ್ಸಿತ ಜನಾಂಗಗಳು ಮತ್ತು ಸಂಸ್ಕೃತಿಗಳ ಪರವಾಗಿ ಹೋರಾಡುವ ಹಕ್ಕು ಹೋರಾಟಗಾರರಾಗಿಯೂ ಗುರುತಿಸಲ್ಪಟ್ಟಿದ್ದಾರೆ.

Yeshaswini.jpg

ಯಶಸ್ವಿನಿ

ಯಶಸ್ವಿನಿ - ನಟಿ, ನಿರ್ದೇಶಕಿ ಹಾಗು ರಂಗಶಿಕ್ಷಕಿ. 2012 ರಲ್ಲಿ ನಟನೆ ಶುರು ಮಾಡಿ, 25ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ಭಾರತದ ಹಲವು ರಂಗ ತಂಡಗಳೊಡನೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. USA ಮತ್ತು UK ಯ ನಿರ್ದೇಶಕರೊಡನೆ ನಟಿಯಾಗಿ ಕೆಲಸ ಮಾಡಿರುವ ಅನುಭವವಿದೆ. 2014ರ ನಂತರ ತಮ್ಮ ಅಭ್ಯಾಸವನ್ನು ವಿಸ್ತಾರಗೊಳಿಸಿಕೊಂಡು, ಮಕ್ಕಳಿಗೆ ರಂಗ ತರಬೇತಿ ನೀಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಕ್ಕಳಿಗೆ ಸ್ವ-ಕೃತಿಗಳನ್ನು ಹಾಗು ಕ್ಲಾಸಿಕ್ ಗಳನ್ನು ಅಳವಡಿಸಿಕೊಂಡು ನಾಟಕಗಳನ್ನು ರಚಿಸಿ ಆಡಿಸಿದ್ದಾರೆ ಹಾಗು ಕತೆ ಹೇಳುವ ವಿಧಾನಗಳನ್ನು ಬಳಸಿಕೊಂಡು ಹಲವು ರಂಗ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ. ರಂಗ ತರಬೇತಿಯು ಮಕ್ಕಳ ಅಭಿವ್ಯಕ್ತಿ ಹಾಗು ಸಬಲೀಕರಣದ ಸಾಧನವಾಗಬಹುದು ಎನ್ನುವ ನಿಟ್ಟಿನಲ್ಲಿ, ಜಾಗೃತಿ ಥಿಯೇಟರ್, ಬ್ರಿಟಿಷ್ ಲೈಬ್ರರಿ, ಮಕ್ಕಳ ಜಾಗೃತಿ (NGO) ಹಾಗು ಇನ್ನಿತರ ಸಂಸ್ಥೆಗಳ ಜೊತೆ ರಂಗಶಿಕ್ಷಕರಾಗಿ ಕೈಜೋಡಿಸಿದ್ದಾರೆ. ಇತ್ತೀಚೆಗೆ, ರಂಗಶಂಕರದ 2024 ರ ವಾರ್ಷಿಕ ರಂಗೋತ್ಸವದ ಅಂಗವಾಗಿ, ಅರ್ಸಲ. ಕೆ. ಲೆಗ್ವಿನ್ ರವರ Introducing Myself ಪ್ರಬಂಧವನ್ನು ಆಧರಿಸಿ, ನಾಟಕವನ್ನು ನಿರ್ದೇಶಿಸಿದ್ದಾರೆ.

© 2023 by Bhasha Centre

  • Instagram
  • Facebook - Black Circle
bottom of page